ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕು ತಿಂಗಳಷ್ಟೇ ಸಮಯ ಇದೆ. ಈ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡದಿಂದ ಉಪೇಂದ್ರ ಸಂದರ್ಶನ ಮಾಡಲಾಗಿದೆ. ಈ ವರೆಗಿನ ಚುನಾವಣೆ ಸಮೀಕ್ಷೆಗಳ ಪ್ರಕಾರ ಕೆಪಿಜೆಪಿಯು ಯಾವುದೇ ಸ್ಥಾನ ಗಳಿಸುವುದಿಲ್ಲ ಅಂತಲೇ ಬರುತ್ತಿದೆ. ಈ ಬಗ್ಗೆ ನೀವೇನಂತೀರಾ ಎಂಬ ಪ್ರಶ್ನೆಗೆ ಈ ಮೇಲಿನಂತೆ ಉಪೇಂದ್ರ ಉತ್ತರಿಸಿದರು. <br /> <br />ಮನೆಯ ಮಹಡಿಯ ಮೇಲೆ ಸೋಫಾದಲ್ಲಿ ಕುಳಿತಿದ್ದ ಉಪೇಂದ್ರ ಎದುರು ತಾಲೀಮಿಗೆ ಅಂತಲೇ ಇದ್ದ ಜಿಮ್ ನ ಸಲಕರಣೆಗಳಿದ್ದವು. ಅಲ್ಲೊಂದು ಬೋರ್ಡ್ ಮೇಲೆ ನಾನು+ನಾನು+ನಾನು= ನಾವು ಎಂಬ ಒಕ್ಕಣೆ. ಬಜೆಟ್ ಬಗ್ಗೆ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆ ಓದಿಕೊಳ್ಳುತ್ತಿದ್ದ ಅವರು, ನಮಗೆ ಸಂದರ್ಶನ ನೀಡುವ ಸಲುವಾಗಿಯೇ ಸ್ವಲ್ಪ ಬಿಡುವಾದರು. <br /> <br />ಇದೇ ಹೊತ್ತಿಗೆ ಕೆಪಿಜೆಪಿಯಿಂದ ಸ್ಪರ್ಧಿಸಲು ಬಯಸಿದ ಆಕಾಂಕ್ಷಿಗಳ ಸಂದರ್ಶನ ಕೂಡ ನಡೆಯುತ್ತಲೇ ಇತ್ತು. "ಮೊದಲ ಸುತ್ತಿನ ಸಂದರ್ಶನ ನಡೆದ ಮೇಲೆ, ಫೈನಲ್ ಆಗಿ ನಾನೊಂದು ಸಲ ಮಾತನಾಡಿಸ್ತೀನಿ" ಎಂದರು ಉಪೇಂದ್ರ. <br />founder of prajakeeya Upendra spoke with Oneindia and talked about his future plans and interview process for applicants for the party